ಕರೋನಾ ವೈರಸ್ ಬಗ್ಗೆ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಜಾಗೃತ ಕಾರ್ಯಕ್ರಮ: ಜೆಸಿಐ

ಶಿವಮೊಗ್ಗ : ಜೆಸಿಐ ಶಿವಮೊಗ್ಗ ಶರಾವತಿ ಘಟಕದ ವತಿಯಿಂದ ಎಂ‌ಅರ್.ಎಸ್ ವೃತ್ತದ ಬಳಿ ಇರುವ ಅಲೆಮಾರಿ ಕ್ಯಾಂಪ್ ನಲ್ಲಿ "ಕರೋನಾ ವೈರಸ್" ಕುರಿತಾಗಿ ಆರೋಗ್ಯ ಜಾಗೃತಿ ಮೂಡಿಸಲಾಯಿತು, ಅಲ್ಲಿನ ನಿವಾಸಿಗಳಿಗೆ, ಮಕ್ಕಳಿಗೆ, ಕರೋನಾ ವೈರಸ್ ಮೂಲ ಹಾಗೂ ಹರಡುವಿಕೆಯಿಂದ ಹೇಗೆ ತಡೆಗಟ್ಟಬಹುದು ಎಂದು ಮುನ್ನೆಚ್ಚರಿಕೆಯ ಮಾಹಿತಿಯನ್ನು ಘಟಕದ ಉಪಾಧ್ಯಕ್ಷರಾದ ಜೆಸಿ.ಮೋಹನ್ ಕಲ್ಪತರು ಅವರು ತಿಳಿಸಿಕೊಟ್ಟರು, ಅಲ್ಲದೆ ಈ ವೈರಸ್ ನಿಂದ ಯಾರು ಆತಂಕ ಪಡುವ ಅಗತ್ಯವಿಲ್ಲ‌ ಈಗಾಗಲೇ ಜಿಲ್ಲಾಡಳಿತ ಪ್ರತ್ಯೇಕ ಚಿಕಿತ್ಸಾ ಕೊಠಡಿಯನ್ನು, ತೆರೆದು ಅಗತ್ಯ ತುರ್ತು ಕ್ರಮ‌ ಕೈಗೊಂಡಿದೆ ಈ ಬಗ್ಗೆ ಯಾವ ಆತಂಕ ಬೇಡ, ಆದರೆ ಈ ವೈರಸ್ ಸೋಂಕುಗಳನ್ನು ತಡೆಗಟ್ಟಲು ನಾವುಗಳು ಜಾಗೃತೆಯಿಂದ ಇರಬೇಕು ಅಲ್ಲದೆ ಪ್ರಾಥಮಿಕ ತಿಳುವಳಿಕೆಗಳು ಇರಬೇಕು, ಆಗಾಗ್ಗೆ ಕೈ ತೊಳೆದುಕೊಳ್ಳುವುದು, ಶೀತ.ನೆಗಡಿ.ಕೆಮ್ಮು ಗಳಿದ್ದರೆ ಸ್ವತಃ ಚಿಕಿತ್ಸೆ ಕೈಗೊಳ್ಳದೆ ಹತ್ತಿರದ ವೈಧ್ಯರು ಅಥವಾ ಸ್ಥಳೀಯ ಮೆಗ್ಗಾನ್ ಆಸ್ಪತ್ರೆಯಲ್ಲಿ ತೆರೆಯಲಾಗಿರುವ " ಚಿಕಿತ್ಸಾ ಕೊಠಡಿಗೆ ಬೇಟಿ ನೀಡಬೇಕು ಎಂದು ಘಟಕದ ಅಧ್ಯಕ್ಷರಾದ ಗಾರಾ.ಶ್ರೀನಿವಾಸ್ ತಿಳಿಸಿದರು, ಮಾಸ್ಕ್ ಗಳನ್ನು ನೆಗಡಿ,ಕೆಮ್ಮು ಇದ್ದವರು ಹಾಕಿಕೊಳ್ಳಬೇಕು ಹಾಗೂ ಕೈ ತೊಳೆದುಕೊಳ್ಳುವಿಕೆಯನ್ನು ಹೇಗೆ ನಾವು ಮಾಡಬೇಕಿದೆ ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜೆಸಿ.ಯಾಹ್ಯ ಎಂ.ಡಿ ಜೆಸಿ.ಶೋಭಾ ಸತೀಶ್ ಹಾಗೂ ಸಹಕಾರ್ಯದರ್ಶಿ, ಜೆಸಿ.ಪರಮೇಶ್ಚರ, ನಿರ್ದೇಶಕರಾದ ಜೆಸಿ.ಅಶ್ವಿನಿ ಆನಂದ್, ಹಾಗೂ ಜೆಸಿ.ಚಿರಂಜೀವಿ ಬಾಬು, ತೋರಿಸಿಕೊಟ್ಟರು, ಜೊತೆಯಲ್ಲಿ ಸ್ಥಳೀಯ ಮುಖಂಡರಾದ ಮಾರೆಪ್ಪ ಹಾಗೂ ಸಂತೋಷ್ ರವರು ಉಪಸ್ಥಿತರಿದ್ದರು, ಕಾರ್ಯದರ್ಶಿ,‌ಜೆಸಿ.ಸ್ಮಿತಾ ಮೋಹನ್ ಎಲ್ಲರನ್ನು ವಂದಿಸಿದರು.

Comments

Popular posts from this blog

ಕುಡಿಯುವ ನೀರು ಪೂರೈಕೆ ವ್ಯತ್ಯಯ: ಸಹಕರಿಸಲು ಮನವಿ

ದತ್ತಿನಿಧಿ ಪುಸ್ತಕ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ: ಕನ್ನಡ ಸಾಹಿತ್ಯ ಪರಿಷತ್‌

ಉಚಿತ ಆರೋಗ್ಯ ತಪಾಸಣಾ ಶಿಬಿರ: ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ